Friday 20 December 2013

ಮನಗೆದ್ದ ಮೆಸ್ಸೇಜಿಂಗ್ ಅಪ್ಲಿಕೇಶನ್ ಗಳು ...

ವಯಸ್ಸು ಇನ್ನೂ ಹರಿನಾರರ ಗಡಿಯನ್ನೂ ಡಾಟಿರುವುದಿಲ್ಲ. ಆದರೂ ಅವರು ಂiವನಿಗರು ಎಂಬುದನ್ನು ಕೈಯಲ್ಲಿರುವ ಮೊಲ್‌ನಿಂದಲೇ ತಿಳಿದು ಕೊಳ್ಳಬೇಕು. ಇಂದಿನ ಯುವ ಪೀಳಿಗೆ  ಮೊಬೈಲ್ ಬಳಸದೇ ಯೌವನ ಶುರುವಾಗೊದೇ ಇಲ್ಲ. ಯೌವನಕ್ಕೂ ಮೊದಲೇ ಮೊಬೈಲ್ ತನ್ನ ಕಾರ್ಯ ಶುರುವಿಟ್ಟುಕೊಂಡಿರುತ್ತೆ. ಎಸ್‌ಎಮ್‌ಎಸ್‌ಗಳ ಹರಿದಾಟ ಆರಂಭವಾಗಿರುತ್ತೆ. ಮೊಬೈಲ್ ಇಲ್ಲದೇ ಎಸ್‌ಎಮ್‌ಎಸ್ ಮಾಡದೇ ಇಂದಿನ ಯುವ ಪೀಳಿಗೆ ಬದುಕಲಾಗದಷ್ಟು ಮೊಬೈಲ್‌ಗಳಿಗೆ ಅಡಿಕ್ಟ್ ಆಗಿದ್ದಾರೆ.. ಇದನ್ನೇ ಬಂಡವಾಳವನ್ನಾಗಿಸಿಕೊಂಡ ಮೊಬೈಲ್ ಕಂಪನಿಗಳು, ಬೇರೆಬೇರೆ ನೆಟ್‌ವರ್ಕ್ ಸರ್ವಿಸ್‌ಗಳು ಲಾಭ ಮಾಡಿಕೊಳ್ಳುತ್ತಿವೆ. ಹಸಿದ ಇಂದಿನ ಯುವ ಪೀಳಿಗೆಗೆ ಬಗೆಬಗೆಯ ಆಕರ್ಷಕ ಅಪ್ಲಿಕೇಷನ್ಸ್‌ಗಳನ್ನು ಸೃಷ್ಟಿಸಿ ಮತ್ತಷ್ಟು ಮೊಬೈಲ್‌ಗಳಲ್ಲೇ ಮುಳುಗುವಂತೆ ಮಾಡುತ್ತಿವೆ. ಅದರಲ್ಲೂ ಎಸ್‌ಎಮ್‌ಎಸ್‌ಗಳಿಲ್ಲದೇ ಇಂದಿನವರು ಯಾವ ಕೆಲಸವನ್ನೂ ಮಾಡಲಾಗದ ಹಂತಕ್ಕೆ ತಲುಪಿದ್ದಾರೆ. ಮೊಬೈಲ್ ಸೇವಾ ಕಂಪನಿಗಳು ಕೂಡ ಸಾಕಷ್ಟು ಅಗ್ಗದ ದರದಲ್ಲಿ, ವಿಶೇಷ ಎಸ್‌ಎಂಎಸ್ ಪ್ಯಾಕೇಜ್‌ಗಳನ್ನೂ ಒದಗಿಸಿವೆ, ಯುವಜನರು ತಮ್ಮಿಂದ ದೂರವಾಗದಂತೆ ನೋಡಿಕೊಳ್ಳಲು ಹೆಣಗಾಡುತ್ತಿವೆ.
ಇಂಟರ್ನೆಟ್ ವ್ಯವಸ್ಥೆ ಈ ಪುಟ್ಟ ಸಾಧನಗಳಿಗೆ ಯಾವಾಗ ಅಳವಡಿಕೆಯಾಯಿತೋ, ಎಸ್‌ಎಂಎಸ್ ವ್ಯವಸ್ಥೆಗೇ ಸಂಚಕಾರ ಬಂತು. ಇದಕ್ಕೆ ಕಾರಣವೆಂದರೆ, ಇಂಟರ್ನೆಟ್ ಇದ್ದರೆ ಉಚಿತವಾಗಿ ಸಂದೇಶ, ಚಾಟಿಂಗ್ ಜತೆಗೆ, ಚಿತ್ರ, ವೀಡಿಯೋ, ಆಡಿಯೋ ಫೈಲ್‌ಗಳನ್ನು ಕೂಡ ಕಳುಹಿಸಬಹುದು. ಮಾತ್ರವಲ್ಲದೆ, ಉಚಿತ ಕರೆಗಳನ್ನೂ ಮಾಡಬಹುದು. ಹೌದು, ಇಂತಹಾ ಅಪ್ಲಿಕೇಶನ್‌ಗಳಿವೆ ಎಂಬುದು ಬಹುತೇಕರಿಗೆ ಅರಿವಿಲ್ಲ.
ಇಂಥವುಗಳಲ್ಲಿ ಹೆಚ್ಚಾಗಿ ಕೇಳಿಬರುತ್ತಿರುವುದುWhatsApp, We-Chat, Viber, Skype
ಮುಂತಾದ ಅಪ್ಲಿಕೇಶನ್‌ಗಳು. ಇದಕ್ಕೆ ಹೊಸದಾಗಿ Line    ಸೇರ್ಪಡೆಯಾಗಿದೆ.  ಎಲ್ಲ ರೀತಿಯ ಸ್ಮಾರ್ಟ್‌ಫೋನ್‌ಗಳಲ್ಲಿ ಕಾರ್ಯಾಚರಿಸುವಂತೆ ಈ ಅಪ್ಲಿಕೇಶನ್‌ಗಳನ್ನು ರೂಪಿಸಲಾಗಿದೆ. ಹೀಗಾಗಿ, ನಿಮ್ಮ ಸ್ನೇಹಿತರ ಬಳಿಯೂ ಈ ಆಪ್ ಇದ್ದರೆ ಉಚಿತವಾಗಿ ಚಾಟಿಂಗ್ ಮಾಡಬಹುದು, ಧ್ವನಿ ಅಥವಾ ವೀಡಿಯೋ ರೆಕಾರ್ಡ್ ಮಾಡಿ ಆಡಿಯೋ/ವೀಡಿಯೋ/ಚಿತ್ರ ಸಂದೇಶಗಳನ್ನೂ ಉಚಿತವಾಗಿ ಕಳುಹಿಸಬಹುದು. ಉಚಿತವಾಗಿಯೇ ಆಡಿಯೋ ಸಂದೇಶ, ಚಿತ್ರ ಅಥವಾ ಟೆಕ್ಸ್ಟ್ ಮೇಸೇಜ್ ಹೀಗೆ ಕಳುಹಿಸಬಹುದು.
ನೀವು ಹಳೇ ಕಾಲದ ಮೊಬೈಲ್‌ಗಳಿಂದ ಇಂದನ ಜನರೇಷನ್‌ಗೆ ಹೊಂದಿಕೊಳ್ಳುತ್ತಿರುವ ಸ್ಮಾರ್ಟ್‌ಫೋನ್‌ಗಳಿಗೆ ಮೊದಲು ಬದಲಾಗಬೇಕು. ನಿಮ್ಮ ಮೊಬೈಲ್ ಮತ್ತು ಸ್ನೇಹಿತರ ಮೊಬೈಲ್‌ಗೆ ಇಂಟರ್ನೆಟ್ ಸಂಪರ್ಕ ಇರಬೇಕಾಗುತ್ತದೆ. ಯಾವುದಾದರೂ ಆಪ್ (ಹೆಚ್ಚು ಪ್ರಸಿದ್ಧವಾಗಿರುವುದು WhatsApp,, ಮತ್ತು ಈಗೀಗ Line ಜನಪ್ರಿಯತೆ ಪಡೆದುಕೊಳ್ಳುತ್ತಿರುವುದು ಐiಟಿe) ಡೌನ್‌ಲೋಡ್ ಮಾಡಿಕೊಳ್ಳಿ. ನಿಮ್ಮ ಸ್ನೇಹಿತವರ್ಗವೂ ಅದೇ ಆಪ್ ಬಳಸಬೇಕಾಗುತ್ತದೆ. ಒಂದು ಸಲ ರಿಜಿಸ್ಟರ್ ಮಾಡಿಕೊಳ್ಳಬೇಕಾಗುತ್ತದೆ.
ರಿಜಿಸ್ಟರ್ ಆದ ಬಳಿಕ, ಆ ಅಪ್ಲಿಕೇಶನ್ ನಿಮ್ಮ ಮೊಬೈಲ್ ಫೋನ್‌ನಲ್ಲಿರುವ ಸ್ನೇಹಿತರ ಸಂಖ್ಯೆಯನ್ನೆಲ್ಲಾ ಹುಡುಕಿ, ಯಾರೆಲ್ಲಾ ಈ ಅಪ್ಲಿಕೇಶನ್ ಬಳಸುತ್ತಿದ್ದಾರೆ ಎಂದು ನಿಮಗೆ ತೋರಿಸುತ್ತದೆ. ಅವರೊಂದಿಗೆ ಹಾಯ್ ಹೇಳುವ ಮೂಲಕ ಮಾತುಕತೆ ಆರಂಭಿಸಬಹುದು, ಚಿತ್ರಗಳನ್ನು ಹಂಚಿಕೊಳ್ಳಬಹುದು. ನಿಮ್ಮದೇ ಒಂದು ಗ್ರೂಪ್ ಕಟ್ಟಿಕೊಂಡು, ಚಾಟಿಂಗ್ ನಡೆಸಬಹುದು. ಇಂತಹಾ ಆಪ್‌ಗಳಲ್ಲಿ ಸ್ಮೆಲಿಗಳು ಅಥವಾ ಎಮೋಟಿಕಾನ್‌ಗಳು ಎಂದು ಕರೆಯಲಾಗುವ ವಿಭಿನ್ನ ಭಾವನೆಗಳನ್ನು ತೋರ್ಪಡಿಸುವ ಮುಖಭಾವಗಳ ಚಿತ್ರಗಳು ಉಚಿತವಾಗಿ ಲಭ್ಯವಾಗಿದ್ದು, ನಿಮ್ಮ ಸಂಭಾಷಣೆಗಳಿಗೆ ಭಾವನೆಗಳನ್ನು ಸೇರಿಸಬಹುದು!
Line  ಅಪ್ಲಿಕೇಶನ್‌ನ ಒಂದು ಅನುಕೂಲವೆಂದರೆ, ೩ಜಿ ಸಂಪರ್ಕದ ಮೂಲಕ ಉಚಿತವಾಗಿ ಕರೆಯನ್ನೂ ಮಾಡಬಹುದು. ಇತ್ತೀಚೆಗಷ್ಟೇ ಭಾರತಕ್ಕೆ ಕಾಲಿರಿಸಿರುವ ಜಪಾನ್‌ನ ಈ ಕಂಪನಿ, ಮೂರೇ ತಿಂಗಳಲ್ಲಿ ೧ ಕೋಟಿ ಬಳಕೆದಾರರನ್ನು ಹೊಂದಿದೆ ಅಂತ ಹೇಳಿಕೊಂಡಿದೆ. ಹೀಗಾಗಿ ಇದನ್ನೂ ಟ್ರೈ ಮಾಡಬಹುದು.

Thursday 28 November 2013

ಇದು ವಾಸ್ತವ

  • ಒಬ್ಬ ವ್ಯಕ್ತಿ ನಿಮ್ಮ ಬಳಿ ಬಂದು ಬೆರೆಯವರ ಬಗ್ಗೆ ಮಾತನಾಡುವಾಗ ಸೂಕ್ಷ್ಮವಾಗಿ ಅವರನ್ನು ಗಮನಿಸಿ.   ನಿಮ್ಮ ಬಗ್ಗೆ ಅವರು ಬೆರೆಯವರೊಂದಿಗೆ ಏನನ್ನು ಮಾತನಾಡಬಹುದು, ಹೇಗೆ ಮಾತನಾಡಬಹುದು ಎಂದು ಮನವರಿಕೆಯಾಗುತ್ತೆ
  • ಭಾರತದಲ್ಲಷ್ಟೇ ಅಲ್ಲ, ಪ್ರಪಂಚದ ಶೇ.72 ರಷ್ಟು ಜನ 'ಕರ್ಮ'ವನ್ನು ನಂಬುತ್ತಾರಂತೆ. ಕರ್ಮ ಎಂದರೆ ನಾವು ಮಾಡಿದ ಪಾಪ ಕೃತ್ಯಗಳ ಪರಿಣಾಮ ಅಥವಾ ನಮ್ಮ ಕೆಲಸಗಳಿಗೆ ಸಿಗುವ ಪ್ರತಿಫಲ. 
  • ನಿಮ್ಮ ಹೆಬ್ಬೆರಳು ನಿಮ್ಮ ಮೂಗಿನಷ್ಟೇ ಉದ್ದವಾಗಿರುತ್ತೆ. ಇದರಲ್ಲಿ ಅನುಮಾನವಿದ್ದರೆ ಪರೀಕ್ಷಿಸಿಕೊಳ್ಳಿ.
  • ಒಬ್ಬ ಹುಡುಗಿ ಹುಡುಗನಿಗಾಗಿ ಅಳುವುದು ಮಾಮೂಲಿ. ಆದರೆ, ಹುಡುಗಿಗಾಗಿ ಒಬ್ಬ ಹುಡುಗ ಅತ್ತರೆ...?; ನಿಮಗೆ ಗೊತೆ, ಅವನಿಗಿಂತ ಅವಳನ್ನು ಪ್ರೀತಿಸುವವರು ಮತ್ತೊಬ್ಬರಿರುವುದಿಲ್ಲ.
  • ಬೆಳಗಿನ ಒಂದು ಕೆಟ್ಟ ಯೋಚನೆ ದಿನದ ಸಂತೋಷವನ್ನೇ ಹಾಳುಮಾಡಿಬಿಡುತ್ತಂತೆ. ಏಳುವಾಗಲೇ ಖುಷಿ ಹಾಳುಮಾಡಿಕೊಳ್ಳಬೇಡಿ. 
  • ಶೇ.80 ರಷ್ಟು ಟೀನೇಜರ‍್ಸ್ ಬೇಳಗಾಗೆದ್ದು ಹಲ್ಲುಜ್ಜುವ ಮುನ್ನ ತಮ್ಮ ಮೊಬೈಲ್‌ಗಳನ್ನು ಚೆಕ್ ಮಾಡುತ್ತಾರಂತೆ.
  • ಗಾಯದ ಮೇಲೆ ಸಕ್ಕರೆಯನ್ನು ಹಾಕಿಕೊಳ್ಳುವುದರಿಂದ ಗಾಯದಿಂದಾಗುವ ನೋವಿನ ಪ್ರಮಾಣವನ್ನು ಕಡಿಮೆ ಮಾಡಬಹುದಂತೆ ಮತ್ತು ಗಾಯ ವಾಸಿಯಾಗುವಲ್ಲಿ ಸಕ್ಕರೆ ಸಹಕಾರಿಯಾಗುತ್ತಂತೆ.  
  • ಶೇ.80 ರಷ್ಟು ಮಹಿಳೆಯರು ಕೇಳುವ ಪ್ರಶ್ನೆಗಳಿಗೆ ಮೊದಲೇ ಉತ್ತರ ತಿಳಿದಿರುತ್ತಂತೆ.  ಆದ್ದರಿಂದ ಮಹಿಳೆರೊಂದಿಗಿದ್ದಾಗ ನಿಜ ಹೇಳುವುದ ಗಂಡಸರಿಗೆ ಒಳಿತಂತೆ. ಇದರಿಂದ ಮುಂದಾಗುವ ಅವಾಂತರಗಳಿಗೆ ಬ್ರೇಕ್ ಹಾಕಬಹುದಂತೆ. 
  • ಖಿನ್ನತೆಗೊಳಗಾದವರು ಅಥವಾ ದುಖ:ದಲ್ಲಿರುವವರು  ಖುಷಿಯಲ್ಲಿರುವವರಿಗಿಂತ ಹೆಚ್ಚು ಹಣ ವ್ಯಯಿಸುತ್ತಾರಂತೆ.
  • ಒಬ್ಬರೊಂದಿಗೆ ನೀವು ನಿಮ್ಮ ಭಾವನೆಗಳನ್ನು ಆಳವಾಗಿ ಬಿಚ್ಚಿಕೊಂಡಷ್ಟು ನಿಮ್ಮೆದುರಿರುವವರಿಗೆ ನಿಮ್ಮನ್ನು ಹರ್ಟ್ ಮಾಡಲು ಹೆಚ್ಚು ಹೆಚ್ಚು ದಾರಿಗಳನ್ನು ತೋರಿಸಿಕೊಟ್ಟಂತಾಗುತ್ತದೆ.
  • ಶೇ.99.99 ರಷ್ಟು ಜನ ಪಾಸ್‌ವರ್ಡ್ ಟೈಪ್ ಮಾಡುವಾಗ ಒಂದು ಅಕ್ಷರ ಅಥವಾ ಸಂಖ್ಯೆ ತಪ್ಪಾದರೂ ಪೂರ್ಣ ಪಾಸ್‌ವರ್ಡ್‌ನ್ನೇ ಅಳಿಸಿ ಮತ್ತೊಮ್ಮೆ ಟೈಪ್ ಮಾಡುತ್ತಾರಂತೆ. 
  • ನೀವು ಯಾರಿಂದಾರೂ ಏನನ್ನಾರೂ ಕೇಳಲು ನಿರೀಕ್ಷಿಸುತ್ತಿದ್ದರೆ ಯಾರಾದರೂ ಸತ್ಯದ ಬದಲು ಸುಳ್ಳು ಹೇಳಿದರೂ ನೀವು ನಂಬುತ್ತೀರಿ.
  • ಸಾಮಾನ್ಯವಾಗಿ ಎಲ್ಲರಿಗೂ ಸಾವು ಎಂಬುದು  ಎರಡನೇ ದೊಡ್ಡ ಭಯವಾಗಿ ಕಾಡುತ್ತಂತೆ. ಎಲ್ಲರನ್ನೂ ಕಾಡುವ ಮೊದಲನೆಯ ಭಯ ಸೋಲಿನ ಭಯವಂತೆ.
  • ನಮ್ಮ ಆಸೆ, ಆಕಾಂಕ್ಷೆ ಬಯಕೆಗಳು, ಬೇಡಿಕೆಗಳು ಪ್ರತಿ ವರ್ಷ ಬದಲಾಗುತ್ತಿರುತ್ತವೆಯಂತೆ. ಇದೇ ಕಾರಣ ಕೆಲವರನ್ನು ನಮ್ಮಿಂದ ದೂರವಾಗಿಸುತ್ತಂತೆ. 
  • ಅಮೇರಿಕಾದಲ್ಲಿ ಪ್ರತಿ ದಿನ 200 ಮಿಲಿಯನ್ ಜೋಡಿಗಳು ಪ್ರೀತಿಯಲ್ಲಿ ಬೀಳುತ್ತಾರಂತೆ. ಅಲ್ಲಿ ನಡೆಯುವ ಪ್ರತಿ ಎರಡು ಮದುವೆಗಳಲ್ಲಿ ಒಂದು ಮದುವೆ ವಿಚ್ಚೇದನದಲ್ಲಿ ಕೊನೆಗೊಳ್ಳುತ್ತೆ. 
  • ಹೊಸ ಪೆನ್‌ಗಳನ್ನು ಖರೀದಿಸಿದ ನಂತರ ಶೇ.97 ರಷ್ಟು ಜನ ಮೊದಲು ತಮ್ಮ ಹೆಸರನ್ನು ಬರೆದುಕೊಳ್ಳುತ್ತಾರಂತೆ. 
  • ಪ್ರತಿಯೊಬ್ಬರೂ ತಮ್ಮ ಜೀವಿತಾವಧಿಯ 3 ವರ್ಷಗಳನ್ನು ಟಾಯ್ಲೆಟ್‌ನಲ್ಲಿಯೇ ಕಳೆಯುತ್ತಾರಂತೆ.  
  • ಕುತ್ತಿಗೆಯ ಭಾಗದಲ್ಲಿ ಕಿಸ್ ಮಾಡುವ ಹುಡುಗರನ್ನು ಹುಡುಗಿಯರು ಹೆಚ್ಚು ಇಷ್ಟ ಪಡುತ್ತಾರಂತೆ. 
  • ವಯಸ್ಸಿಗೆ ಬಂದ ಮಹಿಳೆ ತನ್ನ ಜೀವಿತಾವಧಿಯ ಒಂದು ವರ್ಷವನ್ನು ಯಾವ ಡ್ರೆಸ್ ಹಾಕಿಕೊಳ್ಳಬೇಕು ಎಂದು ಯೋಚಿಸುವುದರಲ್ಲೇ ಕಳೆಯುತ್ತಾಳಂತೆ.
  • ಶೇ.83 ರಷ್ಟು ಮಹಿಳೆಯರು ತಮ್ಮ ದೇಹದ ತೂಕದ ಬಗ್ಗೆ ಸುಳ್ಳು ಹೇಳುತ್ತಾರಂತೆ.
  • ಗಂಡಸರು ಇಲ್ಲದ ವೇಳೆಯಲ್ಲಿ ಹೆಂಗಸರು ಹೆಚ್ಚು ತಿನ್ನಲು  ಬಯಸುತ್ತಾರಂತೆ.
  • ದಿನಕ್ಕೆ 3 ರಿಂದ 5 ಮುತ್ತುಗಳು(Kisses) ನಿಮ್ಮ ದೇಹದ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತಂತೆ.
  • ಮಗುವಿಗೆ ಜನ್ಮ ನೀಡುತ್ತಿರುವ ತಾಯಿ ಅನುಭವಿಸುವ ನೋವು ಜೀವಂತ ಸುಟ್ಟುಕೊಳ್ಳುವ ನೋವಿಗಿಂತ ಹೆಚ್ಚಾಗಿರುತ್ತಂತೆ.     
  • ಶೇ.79 ರಷ್ಟು ಜನ ಸ್ನಾನ ಮಾಡುವ ಸಮಯದಲ್ಲಿ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುತ್ತಾರಂತೆ.
  • ಪುರುಷರ ಮೆದುಳು ಮಹಿಳೆಯರ ಮೆದುಳಿಗಿಂತ ಶೇ.10 ರಷ್ಟು ಗಾತ್ರದಲ್ಲಿ ದೊಡ್ಡದಾಗಿದ್ದರೂ, ,ಮಹಿಳೆಯರ ಮೆದುಳು ಪುರುಷರ ಮೆದುಳಿಗಿಂತ ವೇಗವಾಗಿ  ಕೆಲಸ ಮಾಡುತ್ತದೆ. 
  • ಭಾರತದಲ್ಲಿ ಟಾಯ್ಲೆಟ್(ಶೌಚಾಲಯ)ಗಳಿಗಿಂತ ಮೊಬೈಲ್‌ಗಳೇ ಹೆಚ್ಚಾಗಿವೆಯೆಂತೆ.


     


Monday 25 November 2013

ನಿರುದ್ಯೋಗಿಗಳಿಗೇಕಿಲ್ಲ ’ಉದ್ಯೋಗ ಭಾಗ್ಯ’...?


ಒಂದು ದೇಶದ ಭವಿಷ್ಯ ಆ ದೇಶದ ಯುವ ಜನತೆಯನ್ನು ನೇರವಾಗಿ ಅವಲಂಬಿಸಿರುತ್ತೆ ಎಂದು ಹೇಳುತ್ತಾರೆ. ಆದರೆ, ಇಂದು ಭಾರತದಲ್ಲಿ ನಿರುದ್ಯೋಗ ಹೆಚ್ಚಾಗುತ್ತಿರುವುದರಿಂದ ಯುವಕರ ಕೈಗಳಿಗೆ ಕೆಲಸವಿಲ್ಲದಂತಾಗುತ್ತಿದೆ. ಸರ್ಕಾರ ರೂಪಿಸುತ್ತಿರುವ ದಿನಕ್ಕೊಂದು ಯೋಜನೆಗಳು ಉದ್ಯೋಗ ಸೃಷ್ಟಿಸುವ ಇರಾದೆಯನ್ನೇ ಇಟ್ಟುಕೊಳ್ಳುತ್ತಿಲ್ಲ.

ಭಾರತದಲ್ಲಿನ ಲಕ್ಷಾಂತರ ನಿರುದ್ಯೋಗಿಗಳ ಕೈಗಳು ಕೆಲಸಕ್ಕಾಗಿ ಹಾತೊರೆಯುತ್ತಿವೆ. ಆದರೆ, ಆ ಕೈಗಳಿಗೆ ಸೂಕ್ತವಾದ ಕೆಲಸ ಸಿಗುತ್ತಿಲ್ಲ. ಸಿಕ್ಕ ಕೆಲಸದಲ್ಲಿ ಮೂಲಭೂತ ಅವಶ್ಯಕತೆಗಳನ್ನೂ  ಪೂರೈಸಿಕೊಳ್ಳಲಾಗುತ್ತಿಲ್ಲ. ಇದು ಇನ್ನೊಂದೆಡೆ ಬಡತನಕ್ಕೆ ದಾರಿಮಾಡಿಕೊಡುತ್ತಿದೆ.   ಉದ್ಯೋಗ ಸೃಷ್ಟಿಸುವಲ್ಲಿ ರಾಜ್ಯ ಸರ್ಕಾರವಾಗಲಿ, ಕೇಂದ್ರ ಸರ್ಕಾರವಾಗಲೀ ಸೂಕ್ತ ಯೋಜನೆಗಳನ್ನು ರೂಪಿಸದೆ ತಮ್ಮ ಜವಾಬ್ದಾರಿಯನ್ನು ಮರೆಯುತ್ತಿವೆ.  ಉದ್ಯೋಗ ಸೃಷ್ಟಿಸದಿರುವ ಯಾವುದೇ ಯೋಜನೆ ಅಭಿವೃದ್ದಿಶೀಲ ಭಾರತಕ್ಕೆ  ಕೊಡಲಿ ಏಟು ನೀಡದೇ ಇರದು.

ವೈಜ್ಞಾನಿಕ ಯೋಜನೆಗಳನ್ನು ಜಾರಿಗೊಳಿಸುವುದರೊಂದಿಗೆ ಆ ಯೋಜನೆಗಳು ಉದ್ಯೋಗ ಸೃಷ್ಟಿಸುವ ಆಗರಗಳಾಗುವಂತೆ ಯೋಜನೆಗಳ ರೂಪುರೇಷೆ ತಯಾರಿಸುವುದು ಅಭಿವೃದ್ದಿಶೀಲ ರಾಷ್ಟ್ರ ಭಾರತಕ್ಕೆ ಅನಿವಾರ್ಯವೂ ಹೌದು. ಸಾಮಾನ್ಯರ ಬದುಕಿಗೆ ಒಂದು ಹೊತ್ತಿನ ಊಟ ನೀಡುವ ಯೋಜನೆಗಳನ್ನು ರೂಪಿಸುವ ಜಾಗದಲ್ಲಿ ಸಣ್ಣದೊಂದು ಉದ್ಯೋಗ ಕಲ್ಪಿಸಬಲ್ಲ ಯೋಜನೆಗಳತ್ತ ಗಮನ ಹರಿಸಿದರೆ  ಆ ಸಣ್ಣದೊಂದು ಉದ್ಯೋಗ ಮೂರು ಹೊತ್ತಿನ ಹಸಿವನ್ನು ನೀಗಿಸಬಲ್ಲದು.

ನಮ್ಮ ದೇಶದಲ್ಲಿ ಮಾನವ ಸಂಪನ್ಮೂಲ ಹೇರಳವಾಗಿದೆ. ಅದನ್ನು ಸೂಕ್ತವಾಗಿ ಬಳಸಿಕೊಳ್ಳುವ ಯೋಜನೆಗಳು ಬೇಕಾಗಿವೆ ಅಷ್ಟೆ.  ಒಂದೆಡೆ ಬಡತನವನ್ನು ನೀಗಿಸಿ ಇನ್ನೊಂದೆಡೆ ಉದ್ಯೋಗವನ್ನು ಸೃಷ್ಟಿಸುವಂತಹ ಮುಂದಾಲೋಚನೆಗಳುಳ್ಳ ಯೋಜನೆಗಳು ಭಾರತದ ಸದ್ಯದ ಪರಿಸ್ಥಿತಿಗೆ ಅನಿವಾರ್ಯವಾಗಿದೆ.

ಇತ್ತೀಚೆಗೆ ರಾಜ್ಯದಲ್ಲಿ ಆಡಳಿತಕ್ಕೆ ಬಂದ ರಾಜ್ಯ ಸರ್ಕಾರ ಅನ್ನಭಾಗ್ಯ?, ಶಾಧಿ ಭಾಗ್ಯ? ದಂತಹ ಯೋಜನೆಗಳನ್ನು ರೂಪಿಸುತ್ತಿದೆ. ಕೋಟಿ ಕೋಟಿ ಹಣವನ್ನು ಬೇಡುವ ಈ ಯೋಜನೆಗಳು ಸರ್ಕಾರಕ್ಕೆ ಮತ್ತಷ್ಟು ಹೊರೆ ಯಾಗುವುದರೊಂದಿಗೆ ಆದಾಯದ ಮೂಲಕ್ಕೇ ಮುಳ್ಳಾಗುವ ಸಾಧ್ಯತೆಗಳೇ ಹೆಚ್ಚು.

ಇಂದು ಭಾರತದ ಅಭಿವೃದ್ಧಿಗೆ ಬೇಕಾಗಿರುವುದು, ಒಂದು ಹೊತ್ತಿನ ಊಟ ಅಥವಾ ಸರ್ಕಾರ ನೀಡುವ ಮದುವೆ ಹಣ ಅಲ್ಲ. ತಮ್ಮ ಬದುಕನ್ನು ತಾವೇ ಸ್ವತಂತ್ರ್ಯವಾಗಿ ರೂಪಿಸಿಕೊಡಬಲ್ಲಂತಹ ಉದ್ಯೋಗಾವಕಾಶಗಳು. ಈ ನಿಟ್ಟಿನಲ್ಲಿ ಸರ್ಕಾರ ಆಲೋಚಿಸಿದಲ್ಲಿ ಆರ್ಥಿಕ ಮಟ್ಟವನ್ನು ಸುಧಾರಿಸಬಹುದೇ ಹೊರತು ಅವೈಜ್ಞಾನಿಕ ಯೋಜನೆಗಳನ್ನು ರೂಪಿಸಿ  ಇರುವ ಉದ್ಯೋಗಾವಕಾಶಗಳನ್ನು ಕಿತ್ತುಕೊಳ್ಳುವುದರಿಂದ ಅಲ್ಲ.

ಭಾರತ ಕೃಷಿ ಆಧಾರಿತ ದೇಶ. ಕೃಷಿ ದೇಶದ ಆಧಾರ ಸ್ತಂಭ. ಅಷ್ಟ್ಟೇ ಅಲ್ಲ ಹೆಚ್ಚು ಜನರಿಗೆ ಉದ್ಯೋಗಾವಕಾಶಗಳನ್ನೂ ಸೃಷ್ಟಿಸುವ ಏಕೈಕ ಕ್ಷೇತ್ರ. ಆದರೆ, ಕೃಷಿಗೆ ಹೆಚ್ಚಿನ ಆದ್ಯತೆ ಇಲ್ಲದಿರುವುದರಿಂದ ಹಳ್ಳಿಯ ಯುವ ಜನಾಂಗ ಉದ್ಯೋಗ ಅರಸಿ ನಗರಗಳತ್ತ ವಲಸೆ ಬರುತ್ತಿದ್ದಾರೆ. ಕೃಷಿಗೆ ಹೆಚ್ಚಿನ ಆದ್ಯತೆ ನೀಡಿ, ಇತರೆ ಕ್ಷೇತ್ರಗಳಂತೆ ಕೃಷಿಯನ್ನೂ ಒಂದು ಉದ್ಯಮದ ರೂಪದಲ್ಲಿ ಬೆಳೆಸಲು ಸರ್ಕಾರಗಳ ಸೂಕ್ತ ಯೋಜನೆಗಳು ಅನಿವಾರ್ಯ. ಈ ಮೂಲಕ ನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯವನ್ನು ಕಲ್ಪಿಸುವುದರಿಂದ ಸರ್ಕಾರ ನೀಡುವ ಅಕ್ಕಿ ಅಥವಾ ಮದುವೆಯ ಹಣವನ್ನು ಅವಲಂಬಿಸದೇ ಸ್ವಾವಲಂಬಿಗಳನ್ನಾಗಿ ಮಾಡಬಹುದಾಗಿದೆ.

ಕೊನೆಯದಾಗಿ ಆಡಳಿತಾರೂಢ ಸರ್ಕಾರದಲ್ಲಿ  ಒಂದು ಮನವಿ. ಅನ್ನಭಾಗ್ಯ?, ಶಾದಿಭಾಗ್ಯ? ಯೋಜನೆಗಳಂತೆ ಉದ್ಯೋಗ ಭಾಗ್ಯ?ವನ್ನೂ ಕಲ್ಪಿಸುವ ಯೋಜನೆಗಳತ್ತ ಹೆಚ್ಚು ಆಲೋಚನೆಗಳನ್ನು ಮಾಡಿ. ಹಸಿದವರಿಗೆ ಅರೆಹೊತ್ತಿನ ಊಟದ ಬದಲು. ಸಣ್ಣದೊಂದು ಉದ್ಯೋಗಾವಕಾಶವನ್ನು ಕಲ್ಪಿಸಿ. ಜನರನ್ನು ಸ್ವಾವಲಂಬಿಗಳಾಗಿ ಬದುಕಲು ಅವಕಾಶ ಮಾಡಿಕೊಡಿ.              - - ಶ್ರೀಕಾಂತ್

Tuesday 19 November 2013

ಭರವಸೆಗಳ ಬದುಕಿಗೆ ಬೆಳಕಾಗಲಿ ದೀಪಾವಳಿ



ದಾಪುಗಾಲಿಟ್ಟು ದೀಪಗಳ ಬೆಳಕನ್ನು ಹೊತ್ತು ಮತ್ತೆ ಬಂದಿದೆ ದೀಪಾವಳಿ. ಸಂಭ್ರಮ ತುಂಬಿಕೊಂಡು ಮನೆಯ ಅಂಗಳದಲ್ಲಿ ಜೋಡಿಸಿ ಸಾಲಾಗಿ ಇಟ್ಟ ದೀಪಗಳು ಇನ್ನೇನು ಮೆರವಣಿಗೆ ಹೊರಡುತ್ತವೆ. ಆ ವೈಭವವನ್ನು ಕಣ್ತುಂಬಿಕೊಳ್ಳುತ್ತಾ ಕುಳಿತರೆ ಮನದೊಳಗೆ ಆವರಿಸಿದ್ದ ಕತ್ತಲೆಯನ್ನು ಬೆಳಕು ಬಂದು ಹೊಡೆದೊಡಿಸಿದಂತಹ ಅನುಭವ.   ಕತ್ತಲೆಯಿಂದ ಬೆಳಕಿನೆಡೆಗೆ ಎನ್ನುವ ಮಾತಿದೆ. ಅದರಂತೆಯೇ ದೀಪ ಹಚ್ಚಿ ಬರಿಯ ಮನೆಯ ಒಳ-ಹೊರಗನ್ನು ಬೆಳಗಿಕೊಳ್ಳದೇ, ನಮ್ಮೊಳಗೂ ಬೆಳಗಿಕೊಳ್ಳುತ್ತೇವೆ.  ಅಧ್ಯಾತ್ಮದಲ್ಲಿ ನಮ್ಮೊಳಗೆ ಬೆಳಗಿಕೊಳ್ಳುವುದೆಂದರೆ ಆತ್ಮಾವಲೋಕನಕ್ಕೆ ಅವಕಾಶ ಕಲ್ಪಿಸಿಕೊಳ್ಳುವುದು. ಕಷ್ಟದ ಕತ್ತಲನ್ನು ಧೈರ್ಯದ ಜ್ಯೋತಿಯಿಂದ  ದೂರವಾಗಿಸಿಕೊಂಡು. ಹೊಸ ಬಾಳಿಗೆ ಹೊಸದೊಂದು ಮುನ್ನುಡಿ ಬರೆಯುವ ಪ್ರಯತ್ನವೇ ಈ ದೀಪಾವಳಿ ತಾತ್ಪರ್ಯ.   ಜೀವನದಲ್ಲಿ ಏಳುಬೀಳುಗಳು ಸಹಜ. ಹಗಲು-ರಾತ್ರಿಗಳ ಹಾಗೆ.  ಒಮ್ಮೆ ರಾತ್ರಿಯಾದರೆ ನಿರಾಸೆಗೊಳ್ಳದೆ ಬೆಳಕನ್ನು ಹೊತ್ತು ತರುವ ಸೂರ್ಯನಿಗೆ ಎದುರು ನೋಡುವ ಪ್ರಯತ್ನದಲ್ಲೇ ಜೀವನದ ಸಂತೋಷದ ಗುಟ್ಟು ಅಡಗಿರುತ್ತೆ. ಅದಕ್ಕೇ ಇರಬೇಕು, ದೀಪಾವಳಿಯೊಂದಿಗೆ ದೀಪಗಳನ್ನು ಗಂಟು ಹಾಕಿರುವುದು. ದೀಪಗಳ ಕಾಂತಿಯಲ್ಲೇ ಬದುಕಿನ ದೀಪದ ಉತ್ಸಾಹದ ಬತ್ತಿಗೆ ಸಂತೋಷದ ಕಾಂತಿ ಹಚ್ಚಿಕೊಂಡು ಕಂಗೊಳಿಸುವುದು. ದೀಪಾವಳಿ ಬರಿ ಉಂಡು ಕಳೆಯುವ ಹಬ್ಬವಲ್ಲ. ಮತ್ತೊಂದು ದೀಪಾವಳಿ ಬರುವವರೆಗೂ ಸಂಭ್ರಮವನ್ನು  ಮನಸ್ಸಿನ ಉಗ್ರಾಣದೊಳಗೆ ತುಂಬಿಕೊಳ್ಳುವ ಕ್ಷಣ. ಮನೆಯಲ್ಲಿ ಎಲ್ಲರೂ ಇದ್ದರೆ ಭವ್ಯ ಬೆಳಕು ಹೊತ್ತಿಕೊಂಡಂತೆಯೇ. ಹಾಗಾಗಿಯೇ ಈ ಹಬ್ಬಕ್ಕೆಂದರೆ ಎಲ್ಲರೂ ಮನೆಗೆ ಬಂದು ಸೇರುತ್ತಾರೆ. ನಮ್ಮಲ್ಲಿಯ ಕುಟುಂಬ ಪರಿಕಲ್ಪನೆಯಲ್ಲಿ ಹೀಗೆ ಎಲ್ಲರೂ ಕೂಡಿ-ಆಡಿ ನಲಿದರೆ ಸಂತೋಷದ ಹೊಳೆಯೇ ಹರಿದುಬಿಡುತ್ತದೆ. ಆ ಬೆಳಕಿನಿಂದಲೇ ಭರವಸೆಗಳು ಹುಟ್ಟುತ್ತವೆ. ಆ ಭರವಸೆಗಳೇ ಬದುಕಿಗೆ ಆಧಾರ ಸ್ಥಂಭಳಿದ್ದಂತೆ.

ಈ ಬಾರಿಯ ದೀಪಾವಳಿಯಿಂದ ಬಾಳಿನಲ್ಲ್ಲಿ ತುಂಬಿಕೊಂಡ ಬೆಳಕು ಮುಂದಿನ ದೀಪಾಳಿಯವರೆಗೂ ನಿಮ್ಮ ಬದುಕಿನ ಹಾದಿಗೆ ದಾರಿ ತೋರಿಸಲಿ. ಕಷ್ಟಗಳು ದೇವತೆಗಳನ್ನೇ ಬಿಟ್ಟಿಲ್ಲ. ಇಂದಿಗೂ ಜಗತ್ತನ್ನೇ ಬೆಳಗುವ ಸೂರ್ಯನಿಗೂ ಕೂಡ ಗ್ರಹಣದ ಹೆಸರಲ್ಲಿ ಅಂಧಕಾರ ಕವಿದುಕೊಳ್ಳುತ್ತದೆ. ಆದರೆ ಅದು ಕ್ಷಣಮಾತ್ರ. ತದನಂತರ ಸೂರ್ಯ ಮತ್ತೆ ತಾನು ಪ್ರಕಾಶಿಸಿ ಜಗತ್ತನ್ನು ಬೆಳಗುತ್ತಾನೆ.

ಕಷ್ಟಗಳು ಹುಟ್ಟುವಾಗ ಅದರ ಜೊತೆ ಪರಿಹಾರವೂ ಜನ್ಮತಾಳಿರುತ್ತೆ. ಆ ಪರಿಹಾರವನ್ನೂ ಹುಡುಕಿಕೊಳ್ಳುವ ಸಮಾಧಾನದ ನಡವಳಿಕೆ ನಮ್ಮಲ್ಲಿರಬೇಕು ಅಷ್ಟೇ. ಕಷ್ಟ-ಸುಖಗಳು ಒಂದೇ ನಾಣ್ಯದ ಎರಡು ಮುಖಗಳು. ಕಷ್ಟದ ಹಿಂದೆಯೇ ಸುಖ ಅಡಗಿರುತ್ತದೆ. ನಾಣ್ಯದ ಮುಖ ಬದಲಾಗುವವರೆಗೂ ಕಾಯುವವರಿಗೆ ಮಾತ್ರ ಸುಖದ ದರ್ಶನವಾಗೋದು. ಆ ತಾಳ್ಮೆ, ನೆಮ್ಮದಿ, ಆರೋಗ್ಯ, ಚೈತನ್ಯ  ಐಶ್ವರ್ಯಗಳ ಪ್ರತೀಕವಾಗಲಿ ಈ ದೀಪಾವಳಿ. ಮನದಲ್ಲಿ ಜ್ಞಾನದ ಜ್ಯೋತಿಯನ್ನು ಬೆಳಗಿಸಲು ಪ್ರತಿ ದಿನವೂ ಪ್ರಯತ್ನಿಸಿ. ಈ ದೀಪಾವಳಿ ತಂದಿರುವ ದಿವ್ಯ ದೀಪದಲ್ಲಿ ನಮ್ಮ ಮನೆ-ಮನಗಳ ದೀಪಗಳನ್ನು ಹಚ್ಚಿಕೊಳ್ಳಬೇಕು. ಆ ಬೆಳಕಿನಲ್ಲಿ ನಾವು ನಮ್ಮ ಬದುಕಿನ ಭರವಸೆಗಳನ್ನು ಬೆಳೆಸಿಕೊಳ್ಳಬೇಕು.  ಮಧುರ ಬಾಂಧವ್ಯದ ಎಣ್ಣೆ ಸುರಿದು ನಂದಾದೀಪವಾಗುವಂತೆ ಮಾಡಿಕೊಳ್ಳಬೇಕು. ಅಂಥ ಕ್ಷಣ ಎದುರಾಗಿದೆ. ಬನ್ನಿ ಎಲ್ಲರೂ ದೀಪ ಹಚ್ಚೋಣ, ಹಚ್ಚಿಕೊಳ್ಳೋಣ, ಬೆಳಗೋಣ, ನಮ್ಮೊಳಗೂ ಬೆಳಗಿಕೊಳ್ಳೋಣ. ಬದುಕಿಗೆ ಭರವಸೆಗಳನ್ನು ಬೆಳೆಸಿಕೊಳ್ಳೋಣ. ಬದುಕೋಣ.

ಸಂಬಂಧಗಳ ಮೇಲೊಂದು ಸಮೀಕ್ಷೆ




ಓದಲು ಮುಜುಗರವೆನಿಸಿದರೂ ಓದಲೇಬೇಕಾದ ಕೆಲವೊಂದು ಬೆತ್ತಲಾದ ಸತ್ಯಗಳಿವು. ನಂಬಿದರೆ ನಂಬಿ ಬಿಟ್ಟರೆ ಬಿಡಿ. ಒಂದು ದಿನದಲ್ಲಿ ಸಾವಿರಾರು ಸಮೀಕ್ಷೆಗಳು ನಡೆಯುತ್ತವೆ. ಪ್ರತಿಯೊಂದು ಸಮೀಕ್ಷೆಯೂ ಒಂದೊಂದು ಅಚ್ಚರಿಯನ್ನು ಹೊರಹಾಕುತ್ತವೆ.. ಹಾಗೆಯೇ ಇಲ್ಲಿ ಕೆಲವು ಪತ್ರಿಕೆಗಳು, ಸಂಸ್ಥೆಗಳು, ಎನ್‌ಜಿಓಗಳು ನಡೆಸಿದ ಆಯ್ದ ಕುತೂಹಲ ಕೆರಳಿಸುವ ಕೆಲವು ಸಮೀಕ್ಷೆಗಳು ನಿಮ್ಮ ಮುಂದಿವೆ. ನಿಜಕ್ಕೂ ಅವು ನಿಮ್ಮನ್ನು ದಂಗಾಗಿಸುತ್ತವೆ. ಏಕೆಂದರೆ ಈ ಸಮೀಕ್ಷೆಗೆ ಆಯ್ದುಕೊಂಡ ವಿಷಯವೇ ಅಂತಹದ್ದು. ಸೂಕ್ಷ್ಮ ಸಂಬಂಧಗಳ ನಡುವಿನ ಸಂಘರ್ಷಗಳ ಪರಿಣಾಮವೇ ಈ ಸಮೀಕ್ಷೆಯ ಮೂಲ.

ನಿಮಗೆ ಗೊತ್ತು, ಒಂದು ಸುಂದರ ಸಂಸಾರದಲ್ಲಿ ಹುಳಿ ಹಿಂಡುವ ವಿಷಯವೊಂದಿದ್ದರೆ ಅದು ಅಕ್ರಮ ಸಂಬಂಧದ ಸಂಶಯದ ಗಾಳಿ. ಒಂದು ಹಂತದಲ್ಲಿ ವಯಸ್ಸೆಂಬುದು ನಮ್ಮ ಜೀವನದಲ್ಲಿ ಬಹು ಆಯ್ಕೆ ಪ್ರಶ್ನೆಯಾಗಿ ಎದುರು ನಿಂತುಬಿಡುತ್ತದೆ. ಆ ಪ್ರಶ್ನೆಗೆ ಹೇಗೆ ಉತ್ತರಿಸಬೇಕು ಎಂಬ ಗೊಂದಲದಲ್ಲಿ ನಾನಾ ತಪ್ಪುಗಳು ಅರಿವಿಗೆ ಬರದೇ ನಡೆದು ಹೋಗಬಹುದು. ಇನ್ನೂ ಕೆಲವು ತಪ್ಪುಗಳು ನಮ್ಮ ಅವಸರ, ಆತುರದಿಂದ ನಡೆದು ಹೋಗಿಬಿಡುತ್ತವೆ. ನಂಬಿದವರ ನಂಬಿಕೆಯ ಕನ್ನಡಿಯಲ್ಲಿ ಬಿರುಕು ಕಾಣಿಸಿಕೊಂಡು ನಮ್ಮ ಮುಖವೇ ನಮಗೆ ವಿಕಾರವಾಗಿ ಕಾಣಸಲಾರಂಭಿಸುತ್ತದೆ.

ಜಗತ್ತಿನಲ್ಲಿ ಅತಿ ಹೆಚ್ಚು ಅಪರಾಧ ಕೃತ್ಯಗಳು ನಡೆಯಲು ಕಾರಣವೇ ಪ್ರೇಮ ಮತ್ತು ಕಾಮ ಎಂಬುವ ಎರಡು ಕೊನೆ ಇಲ್ಲದ ಸಮಸ್ಯೆಗಳು. ಈ ವಿಷಯವನ್ನೇ ಆಧಾರವಾಗಿಟ್ಟುಕೊಂಡು ನಡೆದ ಕೆಲವು ಸಮೀಕ್ಷೆಗಳ  ಕೂತೂಹಲಕಾರಿ ಅಂಶಗಳು ಇಲ್ಲಿವೆ ನೋಡಿ.

ಮೊದಲನೆಯ ಸಮಿಕ್ಷೆ ನಿಮಗೆ ಶಾಕ್ ನೀಡಬಹುದು. ಆದರೆ ಅದೇ ಸತ್ಯವಂತೆ. ಇಂದು ಒಬ್ಬ ವ್ಯಕ್ತಿಯು ಮದುವೆಯ ಸಂದರ್ಭದಲ್ಲಿ ಪರ್ಯಾಯ ಸಂಬಂಧವೊಂದನ್ನು ಹೊಂದಿರುವ  ಶೇ.೫೦-೫೦ ಸಂಭವವಿರುತ್ತದೆ ಎಂದು ಕೆಲವು ಸಂಶೋಧಕರು ಹೇಳುತ್ತಾರೆ. ಇದು ದೈಹಿಕ ಮತ್ತು ದೈಹಿಕವಲ್ಲದ ಸಂಬಂಧಗಳನ್ನು ಒಳಗೊಂಡಿರುತ್ತದೆ. ಸುಮಾರು ೩೦ರಿಂದ ೬೦%ರಷ್ಟು ವಿವಾಹಿತರು (ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ) ಅವರ ಮದುವೆಗೆ ಮುಂಚಿನ ಯಾವುದೊದರೊಂದು ಸಂದರ್ಭದಲ್ಲಿ ದಾಂಪತ್ಯ ದ್ರೋಹದಲ್ಲಿ ತೊಡಗಿರುತ್ತಾರೆ ಎಂದು ಅಂದಾಜಿಸಲಾಗಿದೆ. ಕೆಲವು ತಜ್ಞರು (ಉದಾಹರಣೆಗಾಗಿ, ಗ್ರೊ ಅಪ್ ಗೋಲ್ಡನ್ ಬುಕ್ಸ್‌ನ ಫ್ರ್ಯಾಂಕ್ ಪಿಟ್‌ಮ್ಯಾನ್) ೯೦%ರಷ್ಟು ಮೊದಲ ಬಾರಿಯ ವಿವಾಹ-ವಿಚ್ಛೇದನಗಳಿಗೆ ದಾಂಪತ್ಯ ದ್ರೋಹವು ಕಾರಣವಾಗಿರುತ್ತದೆ ಎಂಬುದನ್ನು ಪತ್ತೆಹಚ್ಚಿದ್ದಾರೆ. ಕ್ರಿಸ್ಟಿನ್ ಗಾರ್ಡನ್ ೧೯೯೭ರಲ್ಲಿ ಮಾಡಿದ ಅಧ್ಯಯನವು, “ದಾಂಪತ್ಯ ದ್ರೋಹವನ್ನು ಅನುಭವಿಸುವ ಅರ್ಧಕ್ಕಿಂತಲೂ ಹೆಚ್ಚಿನ ಮದುವೆಗಳು ವಿವಾಹ-ವಿಚ್ಛೇದನದಲ್ಲಿ ಕೊನೆಗೊಳ್ಳುತ್ತವೆ ಎಂದು ಪತ್ತೆಯಾಗಿದೆ. ಮದುವೆಯಾಗಿ ಸಂತೋಷವಾಗಿರುವ ೨೭%ರಷ್ಟು ಮಂದಿ ಒಂದು ಪರ್ಯಾಯ ಸಂಬಂಧವನ್ನು ಹೊಂದಿರುತ್ತಾರಂತೆ..!  ೧೬,೦೦೦ ವಿಶ್ವವಿದ್ಯಾನಿಲಯದ-ವಿದ್ಯಾರ್ಥಿಗಳ ೫೩ ರಾಷ್ಟ್ರಗಳಲ್ಲಿನ ಒಂದು ಇತ್ತೀಚಿನ ಸಮೀಕ್ಷೆಯಲ್ಲಿ, ೨೦%ರಷ್ಟು ದೀರ್ಘ-ಕಾಲದ ಸಂಬಂಧಗಳು ಒಬ್ಬ ಅಥವಾ ಇಬ್ಬರೂ ಸಂಗಾತಿಗಳು ಮತ್ತೊಬ್ಬರೊಂದಿಗೆ ಪರ್ಯಾಯ-ಸಂಬಂಧ ಹೊಂದಿದ್ದಾಗ ಇದು ಆರಂಭವಾಗುತ್ತವೆ ಎಂದು ಹೇಳಲಾಗಿದೆ.  ಸುಮಾರು ೩೦-೪೦%ನಷ್ಟು ಡೇಟಿಂಗ್ ಸಂಬಂಧಗಳು ಹಾಗೂ ೧೮-೨೦%ನಷ್ಟು ಮದುವೆಗಳು ಕನಿಷ್ಠ ಒಂದು ಲೈಂಗಿಕ ದಾಂಪತ್ಯ ದ್ರೋಹದ ಸಂಗತಿಯನ್ನು ಹೊಂದಿರುತ್ತವೆ ಎಂದು ಈ ಅಧ್ಯಯನಗಳು ಸೂಚಿಸುತ್ತವೆ. ವಿವಾಹಿತ ಅಥವಾ ಡೇಟಿಂಗ್ ಸಂಬಂಧದಲ್ಲಿ ಮಹಿಳೆಯರಿಗಿಂತ ಹೆಚ್ಚು ಪುರುಷರು ಪರ್ಯಾಯ ಲೈಂಗಿಕ ಸಂಬಂಧವನ್ನು ಹೊಂದಿರುತ್ತಾರೆ ಎಂದು ಹೇಳಲಾಗುತ್ತಿದೆ.

ಯುನೈಟೆಡ್ ಕಿಂಗ್‌ಡಮ್‌ನ ಐವತ್ತು ವಿವಾಹ-ವಿಚ್ಛೇದನ ವಕೀಲರಲ್ಲಿ, ೨೦೦೩ರಲ್ಲಿ ಅವರ ಪ್ರಕರಣಗಳಿಗೆ ಹೆಚ್ಚು ಸಾಮಾನ್ಯ ಕಾರಣಗಳು ಯಾವೆಂದು ಕೇಳಲಾಯಿತು. ವಿವಾಹೇತರ ಸಂಬಂಧಗಳು ಕಾರಣವೆಂದು ಸೂಚಿಸಿದವರಲ್ಲಿ ೫೫%ನಷ್ಟು ಮಂದಿ ಇದಕ್ಕೆ ಸಾಮಾನ್ಯವಾಗಿ ಪತಿ ಕಾರಣವೆಂದು ಹಾಗೂ ೪೫%ನಷ್ಟು ಮಂದಿ ಪತ್ನಿಯರು ಕಾರಣವೆಂದು ಹೆಚ್ಚಿನ ತಜ್ಞರು ನಂಬಿದ್ದಾರೆ.

   * ದಾಂಪತ್ಯ ದ್ರೋಹ :

“ಸಾಂದರ್ಭಿಕ ಲೈಂಗಿಕತೆಗೆ ಲಿಂಗ ಭಿನ್ನತೆಯು ಕಾರಣವಾಗಿರುತ್ತದೆ. ದಾಂಪತ್ಯ ದ್ರೋಹವು ವಿವಿಧ ರೀತಿಯ ಕಾರಣಗಳಿಂದ ಬರುತ್ತದೆ, ಕೆಲವೊಮ್ಮೆ ಸಂಕೀರ್ಣವಾಗಿಯೂ ಇರುತ್ತದೆ. ಅದು ಪುರುಷ, ಸ್ತ್ರೀ ಮತ್ತು ಪುರುಷರೂ-ಸ್ತ್ರೀಯರೂ ಅಲ್ಲದ ಲಿಂಗಗಳಲ್ಲಿ ಭಿನ್ನವಾಗಿರುತ್ತವೆ. ಮೈಕೆಲ್ ಎ. ಫಾರ್ಮಿಕಾನ “ಸೈಕಾಲಿಜಿ ಟುಡೆ ಬ್ಲಾಗ್‌ನ ಪ್ರಕಾರ, “ಲೈಂಗಿಕತೆ ಮತ್ತು ಭಾವನಾತ್ಮಕತೆ ಮಧ್ಯೆ ಒಂದು ಅನ್ಯೋನ್ಯ ಸಂಬಂಧವಿದೆ. ಪುರುಷರು ಮತ್ತು ಮಹಿಳೆಯರು ಆ ಸಂಬಂಧವನ್ನು ವ್ಯಾಪಕವಾಗಿ ಭಿನ್ನ ಸೂಚನೆಗಳ ಮೂಲಕ ಸಾಧಿಸುತ್ತಾರೆ. ಆ ಭಿನ್ನತೆಗಳು ಸ್ಪಷ್ಟವಾಗಿ ಪ್ರತಿಯೊಂದು ಲಿಂಗದ ದಾಂಪತ್ಯ ದ್ರೋಹದ ಮೇಲೆ ಪರಿಣಾಮ ಬೀರುತ್ತವೆ, ದಾಂಪತ್ಯ ದ್ರೋಹವು ಭಾವನಾತ್ಮಕವಾಗಿರಲಿ ಅಥವಾ ಲೈಂಗಿಕವಾಗಿರಲಿ.

ಆನೆಟ್ಟ್ ಲಾವ್ಸನ್‌ಳ “ಅಡಲ್ಟರಿ ಆನ್ ಅನಾಲಿಸಿಸ್ ಆಫ್ ಲವ್ ಆಂಡ್ ಬೆಟ್ರಾಯಲ್ನಲ್ಲಿ ಆಕೆ ಹೀಗೆಂದು ವಿಚಾರ ಮಾಡುತ್ತಾಳೆ - ಪುರುಷರು ಪರ್ಯಾಯ-ಸಂಬಂಧಗಳನ್ನು ಹೊಂದಿರುವಾಗ, ಅವರು ತಮ್ಮನ್ನು ತಾವು ಖಂಡನೆಗೆ ಒಳಪಡಿಸಲು ಮತ್ತು ಅವಲಂಬಿತರಾಗಲು ಬಯಸುತ್ತಾರೆ. ಅದೇ ಮಹಿಳೆಯರು ಪರ್ಯಾಯ-ಸಂಬಂಧಗಳನ್ನು ಹೊಂದಿರುವಾಗ ಹೆಚ್ಚು ಪ್ರಬಲರಾಗಬೇಕೆಂದು ಮತ್ತು ಸ್ವತಂತ್ರರಾಗಬೇಕೆಂದು ಬಯಸುತ್ತಾರೆ.

* ಕೆಲಸದಲ್ಲಿ ದಾಂಪತ್ಯ ದ್ರೋಹ :

ಕಛೇರಿಯಲ್ಲಿನ ರೊಮಾನ್ಸ್ , ಕೆಲಸದಲ್ಲಿನ ರೊಮಾನ್ಸ್ ಅಥವಾ ಸಂಸ್ಥೆಯಲ್ಲಿನ ಪರ್ಯಾಯ-ಸಂಬಂಧ ಎಂದರೆ ಒಂದೇ ಕಛೇರಿ, ಉದ್ಯೋಗದ-ಸ್ಥಳ ಅಥವಾ ವ್ಯವಹಾರದಲ್ಲಿ ಒಟ್ಟಿಗೆ ಕೆಲಸ ಮಾಡುವ ಇಬ್ಬರು ಮಧ್ಯೆ ಕಂಡುಬರುವ ರೊಮಾನ್ಸ್ ಆಗಿದೆ.   ಕಛೇರಿಯಲ್ಲಿನ ರೊಮಾನ್ಸ್‌ಗಳು ಬೆಳೆಯಲು ಮತ್ತೊಂದು ಕಾರಣವೆಂದರೆ ಸಹೋದ್ಯೋಗಿಗಳು ಒಟ್ಟಿಗೆ ಹೆಚ್ಚು ಸಮಯ ಕಳೆಯುವುದು. ಇಂದು ದಂಪತಿಗಳು ಪರಸ್ಪರ ಒಟ್ಟಿಗೆ ಇರುವುದಕ್ಕಿಂತ ಹೆಚ್ಚು ಕಾಲ ಸಹೋದ್ಯೋಗಿಗಳೊಂದಿಗೆ ಇರುತ್ತಾರೆ. ಲೀಸಾ ಮಿಲ್ಲರ್ ಮತ್ತು ಲೊರೈನ್ ಅಲಿ ನ್ಯೂಸ್‌ವೀಕ್‌ನ ಲೇಖನ “ದಿ ನ್ಯೂ ಇನ್ಫಿಡೆಲಿಟಿಯಲ್ಲಿ ಹೀಗೆಂದು ಸೂಚಿಸಿದ್ದಾರೆ - “ಸುಮಾರು ಶೇಕಡಾ ೬೦ರಷ್ಟು ಅಮರಿಕನ್ ಮಹಿಳೆಯರು ಮನೆಯಿಂದ ಹೊರಗೆ ಹೋಗಿ ಕೆಲಸ ಮಾಡುತ್ತಾರೆ. ಈ ಪ್ರಮಾಣವು ೧೯೬೪ರಲ್ಲಿದ್ದ ಶೇಕಡಾ ೪೦ರಷ್ಟಕ್ಕಿಂತ ಹೆಚ್ಚಾಗಿದೆ. ಶೇವ್ ಮ್ಯಾಗಜಿನ್‌ಗಾಗಿ ಡಾ. ಡೆಬ್ರಾ ಲೈನೊ ಬರೆದ ಲೇಖನದ ಪ್ರಕಾರ, ಮಹಿಳೆಯರು ಉದ್ಯೋಗದ-ಸ್ಥಳದಲ್ಲಿ ವಂಚಿಸಲು ಕಾರಣವೆಂದರೆ ಅವರು ಕೆಲಸದ-ಸ್ಥಳದಲ್ಲಿ ಪುರುಷರೊಂದಿಗೆ ಮಿತಿತಪ್ಪಿ ವ್ಯವಹರಿಸುವುದು ಹಾಗೂ ಅದರ ನೇರ ಪರಿಣಾಮವಾಗಿ ಹೆಚ್ಚಿನವರು ವಂಚಿಸುವ ಅವಕಾಶಗಳನ್ನು ಹೊಂದಿರುತ್ತಾರೆ.

* ದಾಂಪತ್ಯ ದ್ರೋಹ ಮತ್ತು ಇಂಟರ್ನೆಟ್

ಇಂಟರ್ನೆಟ್ ಮತ್ತು ತಂತ್ರಜ್ಞಾನದ ಬೆಳವಣಿಗೆಯು ಸಾಮಾನ್ಯವಾಗಿ ಆಧುನಿಕ ಜೋಡಿಗಳಿಗೆ ಹೊಸ ಸವಾಲುಗಳನ್ನು ತಂದೊಡ್ಡಿದೆ. ೨೦೦೩ರ ಗ್ಲೋಬಲ್ ಇಂಟರ್ನೆಟ್ (ಅಂಕಿಅಂಶ) ಸ್ಟ್ಯಾಟಿಸ್ಟಿಕ್ಸ್‌ನ ಪ್ರಕಾರ, ಪ್ರಪಂಚದಾದ್ಯಂತ ಇಂಟರ್ನೆಟ್ ಬಳಕೆದಾರರ ಸಂಖ್ಯೆಯು ಒಂದು ದಶಕದೊಳಗೆ ಅಸಾಧಾರಣ ರೀತಿಯಲ್ಲಿ ಅತಿ ವೇಗವಾಗಿ ಬೆಳೆದಿದೆ, ೧೯೯೫ರಲ್ಲಿ ೧೬ ದಶಲಕ್ಷದಷ್ಟಿದ್ದ ಬಳಕೆದಾರರ ಸಂಖ್ಯೆಯು ೨೦೦೩ರ ಉತ್ತರಾರ್ಧದಲ್ಲಿ ಸರಿಸುಮಾರು ೬೮೦ ದಶಲಕ್ಷಕ್ಕೆ ಏರಿದೆ. ಅದು೨೦೧೨ ಶೇ.೧೦ ರಷ್ಟು ಹೆಚ್ಚಾಗಿದೆ. ಈಗಂತೂ ಇನ್‌ಟರ್‌ನೆಟ್ ಇಲ್ಲದೇ ಜೀವನವೇ ಇಲ್ಲ ಎಂಬಂತಾಗಿದೆ.  ಅಂತಹ ದಶಲಕ್ಷದಷ್ಟು ಬಳಕೆದಾರರು ಅಪರಿಚಿತರನ್ನು ಭೇಟಿಯಾಗಲು, ಪ್ರೇಮದ ಚೆಲ್ಲಾಟವಾಡಲು ಮತ್ತು ಹೆಚ್ಚಾಗಿ ಲೈಂಗಿಕತೆಯ ಬಗ್ಗೆ ಮಾತಕತೆಯಾಡಲು ಇಂಟರ್ನೆಟ್‌ನ್ನು ಬಳಸುವವರಹ ಹೆಚ್ಚಾಗಿದ್ದಾರೆ.

ಇಂಟರ್ನೆಟ್ ದಾಂಪತ್ಯ ದ್ರೋಹದ ಬಗೆಗಿನ ಸಂಶೋಧನೆಯು ಹೆಚ್ಚುಕಡಿಮೆ ಹೊಸ ಆಸಕ್ತಿಯ ವಿಷಯವಾಗಿದೆ. ಇಂಟರ್ನೆಟ್ ಮೂಲಕ ಯಾವುದೇ ರೀತಿಯ ಲೈಂಗಿಕ ಮಾತುಕತೆಯನ್ನು ದಾಂಪತ್ಯ ದ್ರೋಹವೆಂದು ಹೇಳಲಾಗುವುದಿಲ್ಲ ಏಕೆಂದರೆ ಇದರಲ್ಲಿ ದೈಹಿಕ ಸಂಪರ್ಕವಿರುವುದಿಲ್ಲ. ಅಲನ್ ಸಾಬಲ್ ಮತ್ತು ನಿಕೋಲಸ್ ಪವರ್ “ದಿ ಫಿಲಾಸಫಿ ಆಫ್ ಸೆಕ್ಸ್ ಪುಸ್ತಕದಲ್ಲಿ ಈ ವಿಷಯ ದಾಖಲಿಸಿದ್ದಾರೆ.

ಇಂದಿನ ಮೊಬೈಲ್, ಇನ್‌ಟರ್‌ನೆಟ್,  ಫೇಸ್‌ಬುಕ್, ಟ್ವಿಟರ್, ವಾಟ್ಸ್‌ಅಪ್, ವೀಚಾಟ್, ಗೂಗಲ್ ಚಾಟ್ ಸೇರಿದಮತೆ ಹಲವು ಉಪಯುಕ್ತ ತಂತ್ರಜ್ಞಾನಗಳೂ ಸಹ ಇತ್ತೀಚೆಗೆ ಅಕ್ರಮ ಸಂಬಂಧಗಳಿಗೆ ಕೊಂಡಿ ಬೆಸೆಯುವ ಕಾರ್ಯ ಮಾಡಲು ಸಹಕಾರಿಯಾಗುತ್ತವೆ ಎಂದು ಸಮೀಕ್ಷೆಯೊಂದು ಸ್ಪಷ್ಟಪಡಿಸಿದೆ. ಆದಷ್ಟೂ ಚಾಟಿಂಗ್‌ನಿಂದ ದೂರವಿರುವುದು ಸೇಫ್ ಜೀವಕ್ಕೆ ಸಹಕಾರಿಯೆಂದೂ ಸಹ ತಿಳಿಸಲಾಗಿದೆ.


ಯಶಸ್ವೀ ಪ್ರೀತಿಗೆ ಮೂರು ಮೆಟ್ಟಿಲುಗಳು


“I love you” takes 3 seconds to say, 3 hours to explain and a lifetime to prove.


ಹೌದು, ಪ್ರೀತಿ ಎಂದರೆ ಒಂದರ್ಥದಲ್ಲಿ ಬೇಧಿಸಿಕೊಂಡು ಹೊರ ಬರಲಾಗದಂತಹ ಚಕ್ರವ್ಯೂಹ. ಇದರಲ್ಲ್ಲಿ ಎಲ್ಲವೂ ಇದೆ. ಸ್ಪಲ್ಪ ಖುಷಿ ಇದ್ದರೆ, ಹೆಚ್ಚು ನೋವಿದೆ. ಆ ನೋವಿನಲ್ಲೇ ಎನೋ ಒಂದು ತರಹದ ಸುಖವಿದೆ. ಅದು ಸುಖವೋ, ನೋವೋ ಎಂದು ಅರಿಯುವುದು ಕಷ್ಟಸಾಧ್ಯ. Once you start loving someone, it’s hard to stop.. ಎಂದು ಹೇಳಿರುವುದು ಇದಕ್ಕೆ.

 ಪ್ರೀತಿ ಎಂಬ ಎರಡೂವರೆ ಅಕ್ಷರವನ್ನು ನಿರೂಪಿಸುವುದು ಬಹಳ ಕಷ್ಟ. ಯಾಕೆಂದರೆ ಅದನ್ನು ಪದಗಳಲ್ಲಿ ವರ್ಣಿಸುವುದಕ್ಕೆ ಸಾಧ್ಯವಿಲ್ಲ. ಅದೇನೇ ಇದ್ದರೂ ಅದನ್ನು ಅನುಭವಿಸಿಯೇ ತೀರಬೇಕು. ಅದರಲ್ಲೂ ನಿಜವಾದ ಪ್ರೀತಿ ಅಂದರೆ ಯಾವುದು? ನಿಜವಾದ ಪ್ರೀತಿ ಅಂದರೇನು? ನಿಜವಾದ ಪ್ರೀತಿಯನ್ನು ಗುರುತಿಸುವುದು ಹೇಗೆ? ಎಂಬೆಲ್ಲಾ ಪ್ರಶ್ನೆಗಳು ಪ್ರೀತಿಸಿದವರ, ಮನದಲ್ಲಿ ಮೂಡುವುದು ಸಹಜ.

ಪ್ರೀತಿಸುವ ಪ್ರತಿಯೊಬ್ಬರಿಗೂ ಮೂರು ಮುಖ್ಯ ಹಂತಗಳಲ್ಲಿ ಪ್ರೀತಿ ತನ್ನನ್ನು ತಾನು ಪರೀಕ್ಷಿಸಿಕೊಳ್ಳುತ್ತೆ. ಪ್ರೀತಿ ತನ್ನ ಪ್ರಭಾವ ತೋರಿಸೋದೆ ಮೂರನೇ ಹಂತದಲ್ಲಿ..! ಯಾವುವು ಆ ಮೂರು ಹಂತಗಳು ಎಂದು ಆಲೋಚಿಸುತ್ತಿದ್ದೀರಾ?

ಮೊದಲನೆಯದು ಹಾಗೋ ಹೀಗೋ ಕಳೆದುಹೋಗಿಬಿಡುತ್ತೆ. ಇಷ್ಟಪಟ್ಟವರಿಗೆ ಕಷ್ಟಪಟ್ಟು ಹೇಗೋ ಐ ಲವ್ ಯೂ ಎಂದು ಹೇಳಿಬಿಡುತ್ತೀರಿ. ಆ ಕ್ಷಣ ಬದುಕಿನ ಒಂದನೇ ಹಂತವನ್ನು ನೀವು ದಾಟಿ ಹೋಗಿರುತ್ತೀರಿ.   ಎಡನೇ ಹಂತಕ್ಕೆ ನೀವು ಬಂದು ತಲುಪಿದಾಗ ಮೊದಲನೇ ಹಂತದಲ್ಲಿದ್ದ ನಿಮ್ಮ ಉತ್ಸಾಹ ಹಾಗೆಯೇ ಉಳಿದಿರುವುದಿಲ್ಲ. ಇಲ್ಲಿ ಅನುಮಾನ, ಹಠ, ತಾಳ್ಮೆ ಮತ್ತು ಅರ್ಥ ಮಾಡಿಕೊಳ್ಳುವಿಕೆ ಎಂಬುದು ನಿಮ್ಮ ಪ್ರೀತಿಯನ್ನು ಪರೀಕ್ಷಿಸಲು ನಿಲ್ಲುತ್ತವೆ. ಇದರಲ್ಲಿ ನಿಮ್ಮ ಗೆಲುವು ನೀಮ್ಮ ಪ್ರೀತಿಯ ಪಾವಿತ್ರ್ಯತೆ ಮತ್ತು ದೃಢತೆಯನ್ನು ಅವಲಂಬಿಸಿರುತ್ತೆ. ನಿಮ್ಮ ಪ್ರೀತಿ ನಿಜವೇ ಆಗಿದ್ದರೆ ಮೂರನೇ ಮೆಟ್ಟಿಲೇರಲು ನೀವು ಅರ್ಹರಾಗುತ್ತೀರಿ. ಇಲ್ಲದಿದ್ದರೆ. ಪ್ರೀತಿ ಒಂದು ಮಕ್ಕಳಾಟ, ವಯಸ್ಸಿನ ಆಸೆಗಳ  ಈಡೇರಿಕೆಗೆ  ಉಪಯೋಗಿಸುವ ಒಂದು ಶಬ್ದವೇ ಪ್ರೀತಿ ಎಂದೆನಿಸಿಬಿಡುತ್ತೆ.

ಕರಗಿಸದೇ ಚಿನ್ನದ ಗುಣಮಟ್ಟ ಅಳೆಯಲು ಸಾಧ್ಯವಿಲ್ಲ. ಶಿಲ್ಪಿಯ ಕೈಯಿಂದ ಉಳಿಯೇಟು ಬೀಳದೇ ಶಿಲೆ ಶಿಲ್ಪವಾಗುವುದಿಲ್ಲ. ಎರಡನೇ ಹಂತದಲ್ಲಿ ಪ್ರೀತಿಯ ಪರೀಕ್ಷೆ ನಡೆದರೆ  ಇನ್ನು ಮೂರನೇ ಹಂತದಲ್ಲಿ ತಾಳ್ಮೆಯ ಪರೀಕ್ಷೆ. ಇಲ್ಲಿ ತಾಳ್ಮೆ,  ನಂಬಿಕೆ ಮುಖ್ಯ, ಕಷ್ಟಗಳನ್ನು ಎದುರಿಸಿ ಜಯಿಸುವ ಮನಸ್ಸು ಮುಖ್ಯ. ಮನೆಯವರನ್ನು, ಸಮಾಜವನ್ನು ಎದುರಿಸಿ ಬದುಕಿ ತೋರಿಸಲು ನಿಮ್ಮಿಂದಾದರೆ, ನಿಮ್ಮವರೇ ನಿಮ್ಮನ್ನು ಕೊನೆಗೊಂದು ದಿನ ಒಪ್ಪಿಕೊಂಡು, ನೀವು ಮಾಡಿದ ತಪ್ಪು ನಿಮ್ಮವರಿಗೆಲ್ಲ ತಪ್ಪಲ್ಲ ಎಂದೆನಿಸಿದರೆ,  ನಿಮ್ಮ ಬದುಕಿನ ಪಯಣದಲ್ಲಿ ಪ್ರೀತಿಯ ಪರೀಕ್ಷೆಯಲ್ಲಿ ನೀವು ಪಾಸಾದಂತೆಯೇ. ಅದರೆ, ಅಸಲಿ ಸತ್ವಪರೀಕ್ಷೆಗಳು ಎದುರಾಗುವುದು ಈ ಹಂತದಲ್ಲೇ.

ಒಂದೆಡೆ ಸಮಾಜ ಕೇಳುವ ಪ್ರಶ್ನೆಗೆ ಉತ್ತರಿಸುವ ಅನಿವಾರ್ಯತೆ,  ಬದುಕಿನಲ್ಲಿ ಬದುಕಲಿಕ್ಕಾಗಿ ಕೆಲಸ ಹಿಡಿದು ಕನಸು ಕಟ್ಟಿ ಹೋರಾಡುವ ಹಂತ. ನಿಮ್ಮನ್ನು ನೀವು ಅರ್ಪಿಸಿಕೊಳ್ಳುವ ಹಂತ. ನಿಮ್ಮ ತಾಳ್ಮೆಗೆ ಆಗಾಗ ಉಳಿ ಏಟುಗಳು ಬೀಳುವ ಹಂತ. ಈ ಎಲ್ಲ ಕಷ್ಟಗಳನ್ನು ಎದುರಿಸುವ ಮನೋಸ್ಥೈರ್ಯ ನಿಮಗಿದ್ದು, ಏನೇ ಮಾಡಿದರೂ  ಪ್ರೀತಿಸಿದವರನ್ನು ಸಹಿಸಿಕೊಳ್ಳುವ ತಾಳ್ಮೆ ನಿಮಗಿದ್ದರೆ ಒಂದು ಹಂತಕ್ಕೆ ಪ್ರೀತಿಯಲ್ಲಿ ನೀವು ಪಾಸಾದಂತೆಯೇ. ನಿಮ್ಮ ಪ್ರೀತಿಯನ್ನು ನಿರೂಪಿಸಿದಂತೆಯೇ.

ನಿಜವಾದ ಪ್ರೀತಿ ಏನು ಎಂಬುದರ ಬಗ್ಗೆ ತಿಳಿದುಕೊಳ್ಳುವುದು ಬಹಳ ಅಗತ್ಯ. ಪ್ರೀತಿಯ ಸಂಬಂಧವನ್ನು ಬೆಳೆಸುವಾಗ ನಿಜವಾದ ಪ್ರೀತಿ ಹೌದೋ ಅಲ್ಲವೋ ಎಂಬುದನ್ನು ಅರ್ಥ ಮಾಡಿಕೊಳ್ಳಲೇಬೇಕು. ಹಾಗಾಗಿ ಪ್ರೀತಿಯ ಸಂಬಂಧ ಬೆಳೆಸುವಾಗ ಯೋಚಿಸಿ ನಿರ್ಧಾರ ಕೈಗೊಳ್ಳುವುದು ಸೂಕ್ತ.

Friday 4 October 2013

ಸಂಜೆ ಸಮಯದ ಆರೋಗ್ಯ..!

ಬೆಳಗಾದರೆ ಸಾಕು ಬುದುಕಿನ ಜಂಜಾಟಗಳು ಬೆನ್ನುಬೀಳತೊಡಗುತ್ತವೆ. ಒಂದೆಡೆ ಆಫೀಸ್ ಕೆಲಸದ ಒತ್ತಡ. ಮತ್ತೊಂದೆಡೆ ಸ್ಟ್ರೆಸ್, ಟೆಂಷ್ಯನ್ ಹೀಗೆ ದಿನಪೂರ್ತಿ ಕೆಲಸ ಹಾಗೂ  ದುಡ್ಡು ಗಳಿಸುವ ತವಕದಿಂದ ಆರೋಗ್ಯದ ಮೇಲಿನ ಕಾಳಜಿ ದಿನದಿಂದ ದಿನಕ್ಕೆ ಕಡಿಮೆಯಾಗಿಬಿಡುತ್ತದೆ. ಆಗ ಒಂದು ದಿನ ಆರೋಗ್ಯ ಕೈಕೊಟ್ಟು ಎಲ್ಲ ಕೆಲಸಗಳಿಗೂ ಬ್ರೇಕ್ ಬಿಳುತ್ತದೆ. ಆಧುನಿಕ ಬದುಕಿನಲ್ಲಿ ಆರೋಗ್ಯ ಕೈಕೊಟ್ಟರೆ ಸಮಸ್ಯೆಗಳು ಸಾಲುಗಟ್ಟಿ ನಿಂತು ಕಾಡಲಾರಂಭಿಸುತ್ತವೆ. ನಾವು ಎಲ್ಲಿಯವರೆಗೂ ಆರೋಗ್ಯಕ್ಕಾಗಿ ಸಮಯವನ್ನು ಕಾಯ್ದಿರಿಸುವುದುಲ್ಲವೋ ಅಲ್ಲಿಯವರೆಗೂ ದಾರಿಯುದ್ದಕ್ಕೂ ಗಂಡಾಂತರಗಳು ಓಡುವ ಬದುಕಿಗೆ ತಡೆಯೊಡ್ಡಲು ಕಾದು ಕೂತಿರುತ್ತವೆ. ಪ್ರತಿಯೊಬ್ಬರಿಗೂ ವ್ಯಾಯಾಮವೆಂಬುದು ಅತೀ ಅವಶ್ಯ. ಆದರೆ, ಇಂದು ಕೆಲಸಗಳ ಮಧ್ಯೆ ಸಮಯದ ಅಭಾವ ಎಲ್ಲರನ್ನೂ ಕಾಡುತ್ತದೆ.
ಬೆಳಗಿನ ಜಾವ ಜಾಗಿಂಗ್ ಹೋಗಲು ಎಷ್ಟೋ ಜನರಿಗೆ ಸಮಯವೇ ಇರುವುದಿಲ್ಲ. ಕೆಲಸಕ್ಕೆಂದು ಹತ್ತಾರು ಕಿಲೋಮೀಟರ್ ದೂರ ಹೋಗಬೇಕು, ಅದರಿಂದ ಎರಡು ಗಂಟೆ ಮೊದಲೇ ಮನೆಬಿಡಬೇಕು. ಹೀಗಿದ್ದಾಗ ಬೆಳಗಿನ ಜಾವ ಆರೋಗ್ಯಕ್ಕೆ ಸಮಯ ನಿಗದಿಪಡಿಸಿಕೊಳ್ಳಲು ಎಲ್ಲರಿಗೂ ಸಾಧ್ಯವಾಗುವುದಿಲ್ಲ.  ಆಫೀಸ್‌ಗೆ ಹೋಗುವ ಒತ್ತಡದಲ್ಲಿ ವ್ಯಾಯಾಮ ಮಾಡಿದರೂ ಅದರ ಲಾಭ ಪಡೆದುಕೊಳ್ಳುವುದು ಎಷ್ಟು ಸಾಧ್ಯ ಎನ್ನುವ ಪ್ರಶ್ನೆ ಕಾಡುವುದು ಸಾಮಾನ್ಯ. ಆದರೆ, ಬೆಳಗಿನಜಾವದಲ್ಲೇ ವ್ಯಾಯಾಮಕ್ಕಾಗಿ ಕಾಲ ನಿಗದಿಪಡಿಸಿಕೊಳ್ಳಬೇಕೆಂದೇನಿಲ್ಲ. ಸಂಜೆ ವೇಳೆಯಲ್ಲಿ ವ್ಯಾಯಾಮಕ್ಕೆ ಸಮಯ ನಿಗದಿಪಡಿಸಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳುವುದರೊಂದಿಗೆ ಸಮಯವನ್ನು ಸರಿಯಾಗಿ ಬ್ಯಾಲೆನ್ಸ್ ಮಾಡಬಹುದು.
ನಿಜ ಹೇಳಬೇಕೆಂದರೆ ಬೆಳಗಿನಜಾವಕ್ಕಿಂತ ಸಂಜೆ ಸಮಯದಲ್ಲಿ ಮನಸ್ಸು ಶಾಂತವಾಗಿರುತ್ತದೆ. ಎದ್ದು ಬಿದ್ದು ಆಫೀಸ್‌ಗೆ ಓಡುವ ಒತ್ತಡವಿರುವುದಿಲ್ಲ. ಹೀಗೆ ಮನಸ್ಸು ಶಾಂತಚಿತ್ತವಾಗಿದ್ದಾಗ ಅಲ್ಪ ಸಮಯವನ್ನಾದರೂ ಆರೋಗ್ಯಕ್ಕೆಂದು ಮೀಸಲಿರಿಸಿದರೆ. ಓಡುವ ಬದುಕಿಗೆ ಬೇಕಾದ ಆರೋಗ್ಯವನ್ನು ನಮ್ಮದಾಗಿಸಿಕೊಳ್ಳಬಹುದು. ಅಷ್ಟೇ ಅಲ್ಲ ಸಂಜೆ ಸಮಯದಲ್ಲಿ ವಾಕಿಂಗ್ ಅಥವಾ ವ್ಯಾಯಾಮ  ಮಾಡವುದರಿಂದ ಹೆಚ್ಚಿನ ಲಾಭಗಳನ್ನು ಪಡೆದುಕೊಳ್ಳಬಹುದು ಹೇಗೆ ಎಬುದನ್ನು ಈ ಕೆಳಗಿನ ಅಂಶಗಳು ನಿಮಗೆ ಮನವರಿಕೆ ಮಾಡಿಕೊಡುತ್ತವೆ.
ಉತ್ತಮ ನಿದ್ರೆಯನ್ನು ಖಚಿತಪಡಿಸುತ್ತದೆ :
ಹೌದು ದಿನವಿಡಿ ಕೆಲಸದಿಂದ ಹೈರಾಣಾಗಿ ಸಂಜೆ ಸಮಯದಲ್ಲಿ ಕನಿಷ್ಠವೆಂದರೂ ಒಂದು ಗಂಟೆಯಾದರೂ ವ್ಯಾಯಾಮ ಅಥವಾ ವಾಕಿಂಗ್ ಮಾಡುವುದರಿಂದ ಆ ದಿನದ ಎಲ್ಲ ಒತ್ತಡಗಳನ್ನು ಕಡಿಮೆಮಾಡಬಹುದು. ಸಂಜೆ ಸಮಯದಲ್ಲಿ ಇತರರೊಂದಿಗೆ ಸೇರಿ ಖುಷಿಯಿಂದ ಕಾಲಕಳೆಯುತ್ತ ವರ್ಕೌಟ್ ಮಾಡುವುದರಿಂದ ದೇಹ ಹಗುರವಾಗುತ್ತದೆ. ಇದರಿಂದ ರಾತ್ರಿ ವೇಳೆಯಲ್ಲಿ ಸುಖನಿದ್ದೆಗೆ ಜಾರಬಹುದು. ನೆಮ್ಮದಿ ನಿದ್ದೆಯಿಂದ ಆರೋಗ್ಯ ತಾನಾಗಿಯೇ ಹತೋಟಿಗೆ ಬರುತ್ತದೆ. ಹಾಗೂ ಮರುದಿನ ಬೆಳಿಗ್ಗೆ ಮತ್ತೆ   ಉತ್ಸಾಹದಿಂದ ಕೆಲಸದಲ್ಲಿ ತೊಡಿಗಿಸಿಕೊಳ್ಳಬಹುದು.
ಆರೋಗ್ಯಕ್ಕಾಗಿ ಹೆಚ್ಚಿನ ಸಮಯವನ್ನು ಮೀಸಲಿಡಬಹುದು :
ಬೆಳಗಿನ ಜಾವಕ್ಕೆ ಹೋಲಿಸಿದರೆ ಸಂಜೆ ಯಾವುದೇ ಕಲಸಗಳ ಒತ್ತಡವಿರುವುದಿಲ್ಲ. ಆಗ ಹೆಚ್ಚಿನ ಸಮಯವನ್ನು ದೇಹದ ಫಿಟ್ನೆಸ್ ಬಗ್ಗೆ ಮೀಸಲಿಡಬಹುದು. ಸಂಜೆ ಹೆಚ್ಚು ಸಮಯ ಸಿಗುವುದರಿಂದ ವಾಕಿಂಗ್, ವ್ಯಾಯಾಮ, ಯೋಗದಂತಹ ಚಟುವಟಿಕೆಗಳಲ್ಲಿ ನಿಶ್ಚಿಂತೆಯಿಂದ ತೊಡಗಿಸಿಕೊಳ್ಳಬಹುದು.
ಹೆಚ್ಚು ಕ್ಯಾಲೋರಿಗಳನ್ನು ಬರ್ನ್ ಮಾಡಬಹುದು :
ಹೆಚ್ಚು ಹೆಚ್ಚು ವ್ಯಾಯಾಮ ಮಾಡುವುದರಿಂದ ಹೆಚ್ಚು ಕ್ಯಾಲೋರಿಗಳನ್ನು ಬರ್ನ್ ಮಾಡಬಹುದು. ಆದರೆ ಬೆಳಗಿನ ಜಾವ ಹೆಚ್ಚಾಗಿ ವರ್ಕೌಟ್ ಮಾಡಲು ಸಮಯದ ಅಭಾವವಿರುತ್ತದೆ. ಬೊಜ್ಜು, ದೇಹದ ಅತಿಯಾದ ತೂಕ ಹೀಗೆ ಅನೇಕ ಸಮಸ್ಯೆಗಳಿರುವವರು ಸಂಜೆ ಸಮಯವನ್ನೇ ಆಯ್ದುಕೊಳ್ಳುವುದು ಒಳಿತು. ಆಗ ಹೆಚ್ಚು ಕ್ಯಾಲೋರಿಗಳನ್ನು ಕರಗಿಸಲು ಸಮಯ ಸಿಗುತ್ತದೆ.


ನಿಮ್ಮ ರಕ್ತದಾನದಿಂದ ಹಲವರಿಗೆ ಜೀವದಾನ


ಹುಟ್ಟು ಮತ್ತು ಸಾವು ಪ್ರಕೃತಿಯ ನಿಯಮಗಳು. ಹುಟ್ಟಿಗೆ ಒಂದೇ ಮುಖ ಆದರೆ, ಸಾವಿಗೆ ಸಾವಿರ ಮುಖಗಳು, ಯಾವ ಕ್ಷಣದಲ್ಲಿ ಯಾರಿಗೆ, ಹೇಗೆ ಸಾವು ಸಮೀಪಿಸುತ್ತೆ ಎಂದು ಹೇಳಲಾಗುವುದಿಲ್ಲ. ಆದರೆ, ಒಂದು ಸಂಗತಿ ನಿಮ್ಮನ್ನು ಬೆಚ್ಚಿಬೀಳಿಸದೇ ಇರದು. ಹೌದು, ಪ್ರತಿನಿತ್ಯ ದೇಶದಲ್ಲಿ ಸಾಯುವವರಲ್ಲಿ  ಶೇಕಡಾ ೪೩ ರಷ್ಟು ಜನರ ಸಾವಿಗೆ ಕಾರಣವಾಗುತ್ತಿರುವುದು ರಕ್ತದ ಕೊರತೆಯ ಸಮಸ್ಯೆ. ಸಮಯಕ್ಕೆ ಸರಿಯಾಗಿ ರಕ್ತ ಸಿಕ್ಕರೆ ಅದೆಷ್ಟೋ ಜನರ ಪ್ರಾಣ ಉಳಿಸಬಹುದು ಎಂಬುದು ಇದರಿಂದ ತಿಳಿಯಬಹುದು.
ಇತ್ತೀಚೆಗೆ ರಕ್ತದಾನದ ಬಗ್ಗೆ ಸರ್ಕಾರದಿಂದ ಹಿಡಿದು ನಾನಾ ಎನ್‌ಜಿಒಗಳೂ ಸಹ ರಕ್ತದಾನದ ಮಹತ್ವವನ್ನು ಸಾರಿ ಸಾರಿ ಹೇಳುತ್ತಿವೆ. ಆದರೆ ಅದನ್ನು ಕೇಳುವಷ್ಟು ತಾಳ್ಮೆ, ರಕ್ತವನ್ನು ದಾನವಾಗಿ ನೀಡುವಷ್ಟು ಒಳ್ಳೆಯ ಮನಸ್ಸುಗಳ ಕೊರತೆ ಎದ್ದು ಕಾಡುತ್ತಿದೆ.  ನೇತ್ರದಾನ ಕೇವಲ ಒಮ್ಮೆ ಮಾತ್ರ, ಮೂತ್ರಪಿಂಡದಾನವು ಕೇವಲ ಒಮ್ಮೆ ಮಾತ್ರ, ಹೃದಯದಾನ ಅದೂ ಕೇವಲ ಒಮ್ಮೆ ಮಾತ್ರ, ಆದರೆ ರಕ್ತದಾನ ನಿರಂತರ, ಜೀವ ಇರುವ ವರೆಗೆ... ದೇಹ ಮಣ್ಣಾಗುವವರೆಗೂ ಮಾಡಬಹುದಾದ ಶ್ರೇಷ್ಠ ದಾನ.
ನಮ್ಮಲ್ಲಿ ಅನೇಕರು ರಕ್ತದಾನ ಮಾಡೋದಕ್ಕೆ ಹೆದರುತ್ತಾರೆ. ಹೋದ ರಕ್ತ ಮತ್ತೆ ಮರಳಿ ಬರುವುದಿಲ್ಲ ಎನ್ನುವ ಅಪನಂಬಿಕೆ ಅವರದ್ದು. ಆದರೆ ಸತ್ಯ ಏನೆಂದರೆ ಕೇವಲ ೪೮ ಘಂಟೆಗಳಲ್ಲಿ ನಿಮ್ಮ ರಕ್ತವನ್ನ ನಿಮ್ಮ ದೇಹವು ಪುನಃ ಪಡೆದುಕೊಂಡಿರುತ್ತದೆ. ಹಾಗಾದಮೇಲೆ ನಾವು ಏಕೆ ರಕ್ತವನ್ನು ಅವಶ್ಯಕತೆ ಇರುವವರಿಗೆ ದಾನ ಮಾಡಿ ಒಂದು ಜೀವವನ್ನು ಉಳಿಸಬಾರದು? ಪ್ರತಿಯೊಬ್ಬರೂ ತಮ್ಮ ೧೮ನೇ ವಯಸ್ಸಿನಿಂದ ನಿರಂತರವಾಗಿ ರಕ್ತವನ್ನ ದಾನ ಮಾಡಬಹುದು.  ಇದರಿಂದ ಯಾವ ತೊಂದೆರೆಯೂ ಇಲ್ಲ ಎಂಬ ಸತ್ಯದ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಲೇಬೇಕಾದ ಅನಿವಾರ್ಯತೆ ಎದುರಾಗಿದೆ.. ಏಕೆಂದರೆ ಸಾವಿರಾರು ಮಂದಿ ಅಪಘಾತದಲ್ಲೋ ಅಥವಾ ಇನ್ಯಾವುದೋ ಅವಘಡದಲ್ಲಿ ತಮ್ಮ ರಕ್ತವನ್ನು ಕಳೆದುಕೊಂಡು ಪ್ರಾಣ ಬಿಡುತ್ತಾರೆ. ಅವರಿಗೆ ಸರಿಯಾದ ಸಮಯಕ್ಕೆ ರಕ್ತ ಸಿಕ್ಕರೆ ಪ್ರಾಣಾಪಾಯದಿಂದ ಪಾರಾಗುತ್ತಾರೆ.  ಇಂದಿನ ಯುವಕರು/ಯುವತಿಯರು ರಕ್ತದಾನದ ಮಹತ್ವದ ಬಗ್ಗೆ ಅರಿತು ಸ್ವಯಿಚ್ಛೆಯಿಂದ ರಕ್ತದಾನ ಮಾಡುವ ಮನಸ್ಸು ಮಾಡುವುದು ಸಮಾಜದಲ್ಲಿ ಉತ್ತಮ ಬದಲಾವಣೆಗೆ ನಾಂದಿಯಾಗಲಿದೆ. ಏಕೆಂದರೆ  ಪ್ರತಿ ಎರಡು ಸೆಕೆಂಡಿಗೆ ಯಾರಾದರೊಬ್ಬರಿಗೆ ರಕ್ತದ ಅವಶ್ಯಕತೆಯಿರುತ್ತದೆ. ನಿಮ್ಮ ರಕ್ತ ಒಮ್ಮೆಗೆ ಒಂದಕ್ಕಿಂತ ಹೆಚ್ಚು ಜೀವಗಳಿಗೆ ಸಹಾಯವಾಬಲ್ಲದು. ಅಪಘಾತಕ್ಕೆ ಒಳಗಾದವರು, ಗರ್ಭಾವಧಿ ಪೂರ್ಣವಾಗುವ ಮೊದಲೇ ಹುಟ್ಟಿದ (ಪ್ರಿಮೆಚೂರ್) ಶಿಶುಗಳು, ಪ್ರಮುಖ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿರುವ ರೋಗಿಗಳು- ಇಂಥವರಿಗೆ ಸಂಪೂರ್ಣ ರಕ್ತದ ಅವಶ್ಯಕತೆ ಇರುತ್ತದೆ. ಇಲ್ಲಿ ನಿಮ್ಮ ರಕ್ತವನ್ನು ಪರೀಕ್ಷೆಗೊಳಪಡಿಸಿದ ನಂತವೇ ರಕ್ತವನ್ನು ನೇರವಾಗಿ ಬಳಸಲಾಗುತ್ತದೆ. ಅಪಘಾತ, ರಕ್ತಹೀನತೆ, ಮತ್ತು ಇತರ ಶಸ್ತ್ರಚಿಕಿತ್ಸೆಗಳಿಂದ ನರಳುತ್ತಿರುವ ಜನರಿಗೆ ಕೇವಲ ಕೆಂಪುರಕ್ತಕಣಗಳ ಅವಶ್ಯಕತೆಯಿರುತ್ತದೆ. ಅದನ್ನು ನಿಮ್ಮ ರಕ್ತದಿಂದ ಬೇರ್ಪಡಿಸಿ ಪೂರೈಸಲಾಗುತ್ತದೆ. ಆಗ ನಿಮ್ಮ ರಕ್ತ ಮತ್ತೊಂದು ಜೀವಕ್ಕೆ ಮರುಜನ್ಮನೀಡಲು ಸಹಾಯಕವಾಗುತ್ತದೆ.